‘ತರ್ಲೆ ನನ್ ಮಕ್ಳು’ ನಾಳೆಯಿಂದ
Posted date: 14 Thu, Jan 2016 – 08:21:40 AM

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ‘ತರ್ಲೆ ನನ್ನ ಮಕ್ಳು’... ಎಲ್ಲರನ್ನೂ ರಂಜಿಸಲು ಬರುತ್ತಿದ್ದಾರೆ. ಇದು ಯುವ ನಿರ್ದೇಶಕ ರಾಕೇಶ್ ಅವರ ಪ್ರಥಮ ಚಿತ್ರ. ಈಗಿನ ಯುವ ಜನಾಂಗಕ್ಕೆ ಬೇಕಾದ ಅಂಶಗಳನ್ನೇ ಪ್ರಧಾನವಾಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಿದ್ದಾರೆ.
ಗ್ರೀನ್ ಲೈನ್ ಟ್ರಾವೆಲ್ಸ್ ಸಚ್ಚಿದಾನಂದ ಹಾಗೂ ಸತೀಶ್ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಯತಿರಾಜ್ (ಜಗ್ಗೇಶ್ ಅವರ ದ್ವಿತೀಯ ಪುತ್ರ), ಅಂಜನ ದೇಶಪಾಂಡೆ, ನಾಗಶೇಖರ್, ಶುಭಾ ಪೂಂಜಾ, ಸೌಜನ್ಯ, ಲಯೇಂದ್ರ, ರಿತೇಶ್, ಸೌಜನ್ಯ ಹಾಗೂ ಇತರರ ಅಭಿನಯವಿದೆ.
ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರದು ಅತಿಥಿ ಪಾತ್ರ. ಐವರು ನಿರ್ದೇಶಕರು ಡಾ. ವಿ ನಾಗೇಂದ್ರಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಜಗ್ಗೇಶ್, ನೆನಪಿರಲಿ ಪ್ರೇಂಕುಮಾರ್, ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಿದ್ದಾರೆ.
ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿರುವ ಈ ಚಿತ್ರದಲ್ಲಿ ತರ್ಲೆಗಳ ವಿಚಾರವನ್ನು ಮನರಂಜನಾತ್ಮಕ ರೀತಿಯಲ್ಲಿ ಹೇಳಿದ್ದಾರೆ. ಈ ಚಿತ್ರದ ಮುಖಾಂತರ ಸೂರ್ಯವಂಶಿ ಡೀ.ಜೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಜೇರಾಲ್ಡ್ ಈ ಚಿತ್ರದ ಛಾಯಾಗ್ರಹಕ. ನಾಯಕಿ ಶುಭಾ ಪೂಂಜಾ ಅವರು ಈ ಚಿತ್ರಕ್ಕೆ ಒಂದು ಹಾಡನ್ನು ಹಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed